ದುಂಡುಚಿ

ಪಂಡಿತರೇ ವಿವಿಧ ಕಳಾ ಮಂಡಿತರೇ
ಇದು ನೀವು ಕೇಳತಕ್ಕ ಕೃತಿಯಲ್ಲ
ಇದು ಬೀದಿವರೆ ಬೀರನ ಕತೆ ಒಂಟಿ ವ್ಯಥೆ
ಮುಚ್ಚಿ ಕಿವಿ ಇದು ಬೇರೆಯೇ ಕತೆ
ಬೇಕೆಂದೇ ಹೇಳಿದ್ದು ಸರಸ್ವತಿ ಬರೆಸಿದ್ದಲ್ಲ
ಅವಳ ಸಂಗತಿ ಬೇರೆ
ಸ್ಫೂರ್ತಿ ಸುರಿದದ್ದಲ್ಲ ಕಲೆ ಒಲಿದದ್ದಲ್ಲ
ಅವೆಲ್ಲ ನಿಮ್ಮ ಪೇಟೆಂಟು ಸ್ವತ್ತು
ಆ ಗತ್ತು ಸಾಕು -ಹಳೆಮಾಲು ಜರಿರುಮಾಲು ನಿಮಗೇ ಸಾಕು
ಇಲ್ಲಿ ಬೆಳಗ್ಗೆ ಬಿಲ್ಲಿಯ ಬೇಟೆ ಕೂಗುತ್ತ
ಹೊರಗೆ ಫಸ್ಟ್ ಗೀಯರಿನ ಟ್ರಕ್ಕಿನ ಭರಾಟೆ
ಬಡಿಯುತ್ತ ಹೊಟ್ಟೆಗೆ ತಾಳ ಹಾಕುತ್ತ
ಕೊನೆನಿದ್ದೆ ಹೆಣೆದ ಸ್ವಪ್ನ ಒಡೆಯುತ್ತ ಒಡೆಯುತ್ತ
ಒಡೆದು ಬಿದ್ದವನ ಒಡಕು ತಮ್ಮಟೆ
ನುಚ್ಚು ನೂರಾದ ಅಪಸ್ವರ-ಸಾವಿರ ಸ್ವರ
ನಿಮ್ಮ ನಾಜೂಕು ಕಿವಿಗೆ ತಾಗೀತೆ ಈ ಧ್ವನಿ?
ವೇಷಧಾರಿಗಳೇ ಏಳಿ
ನೀವು ಕುಣಿದದ್ದು ಸಾಕು
ಎಣ್ಣೆ ಹಾಕಿ ತೊಳೆಯಿರಿ ಬಣ್ಣ
ನಿಮ್ಮ ಶ್ರಾದ್ಧಕ್ಕೆ ಈ ಆಪೋಷಣ:
ವಾತಾಪಿ ಜೀರ್ಣೋ ಭವ ! ಹರೋಹರ !
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಹೆಣ್ಣು ಜೀವಕ್ಕೆ ಏನೂ ಅನ್ನಿಸೋದಿಲ್ವೆ?
Next post ಜಗಜ್ಯೋತಿ

ಸಣ್ಣ ಕತೆ

  • ಕೊಳಲು ಉಳಿದಿದೆ

    ಮಾತಿನ ತೆರೆ ಒಂದು "ನೋಡಿ, ಜನರು ನನ್ನನ್ನು ನೋಡಿ ನಗುತ್ತಾರೆ! ಈ ಬಂಗಾರದ ಕೃಷ್ಣನ ಮೂರ್ತಿ ಇವಳ ಕೈಯಲ್ಲಿ ಯಾವಾಗಲೂ ಏಕೆ ಎಂದು ಕೇಳುತ್ತಾರೆ! ನನ್ನ ಹತ್ತರ… Read more…

  • ಕನಸುಗಳಿಗೆ ದಡಗಳಿರುದಿಲ್ಲ

    ಬೆಳಗ್ಗಿನ ಸ್ನಾನ ಮುಗಿಸಿದ ವೃಂದಾ ತನ್ನ ರೂಮಿಗೆ ಬಂದು ಬಾಗಿಲುಹಾಕಿಕೊಂಡು ಕನ್ನಡಿಯಲ್ಲಿ ತನ್ನ ದೇಹ ಸಿರಿಯನ್ನೊಮ್ಮೆ ನೋಡಿಕೊಂಡಳು. ಯಾಕೋ ಅವಳ ಮೈ - ಮನ ಒಮ್ಮೆ ಪುಲಕಿತವಾಯಿತು.… Read more…

  • ಅಹಮ್ ಬ್ರಹ್ಮಾಸ್ಮಿ

    ಬಹುಶಃ ಮೊದಲ ಬಾರಿ ನಾನು ಅವನನ್ನು ನೋಡುತ್ತಿರಬೇಕು. ಅವನು ಅಕಸ್ಮತ್ತಾಗಿ ನನ್ನ ಕಣ್ಣಿಗೆ ಬಿದ್ದನೋ, ಅಲ್ಲಾ ಅವನೇ ನಾನು ಕಾಣುವ ಹಾಗೆ ಎದುರಿಗೆ ಬಂದನೋ ಎಂಬ ವಿಷಯದಲ್ಲಿ… Read more…

  • ಕರಿ ನಾಗರಗಳು

    ಚಿತ್ರ: ಆಂಬರ್‍ ಕ್ಲೇ ಇಶಾಂ ನಮಾಜಿಗೆ (ರಾತ್ರೆಯ ನಮಾಜು) ಮೊದಲು ಅರಬ್ಬಿ ಪುಸ್ತಕವನ್ನು ಬ್ಯಾಗಿನೊಳಗಿಟ್ಟುಕೊಂಡು, ಅದನ್ನು ದುಪಟ್ಟದೊಳಗೆ ಮರೆ ಮಾಡಿಕೊಂಡು ಓಡಿ ಬಂದ, ತರನ್ನುಮ್‌ ನೀರು ಹರಿಯುತ್ತಿದ್ದ… Read more…

  • ಎರಡು ಪರಿವಾರಗಳು

    ಇದು ಎರಡು ಪರಿವಾರದ ಕತೆ. ಒಂದು ಹಕ್ಕಿ ಪರಿವಾರ, ಇನ್ನೊಂದು ಮನುಷ್ಯ ಪರಿವಾರದ್ದು. ಒಂದು ಸುಂದರ ತೋಟ; ವಿಧವಿಧದ ಗಿಡ ಮರಗಳು; ಅವುಗಳ ಕವಲು ಬಿಟ್ಟ ರೆಂಬೆಗಳಲ್ಲಿ… Read more…

cheap jordans|wholesale air max|wholesale jordans|wholesale jewelry|wholesale jerseys